Close Menu

    Subscribe to Updates

    Get the latest creative news from FooBar about art, design and business.

    What's Hot

    ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ

    ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲ್ಯಾಂಡ್ಸ್ ಭೇಟಿ ನೀಡಿದರು

    ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

    Facebook X (Twitter) Instagram
    Trending
    • ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ
    • ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲ್ಯಾಂಡ್ಸ್ ಭೇಟಿ ನೀಡಿದರು
    • ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
    • ಕೇರಳ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭಾಗವಹಿಸಲಿದ್ದಾರೆ
    • ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಲು ಸುವೇಂದು ಸಿದ್ಧತೆ
    • ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ
    • ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು
    • ಭಾರತಿ ಅಸೋಸಿಯೇಷನ್‌ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು
    India

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    News DeskBy News DeskJuly 8, 2024Updated:July 8, 2024No Comments2 Mins Read89 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಮಂಗಳೂರು :ಬೋಳೂರಿನ ಜಾರಂದಾಯ ದೈವ ಸ್ಥಾನ ಮತ್ತು ಬೋಳೂರು ಬಿಲ್ಲವ ಗ್ರಾಮ ಸಮಿತಿಯ  ಆಶ್ರಯದಲ್ಲಿ , ಶ್ರೀ ನಾರಾಯಣ ಗುರು ಎಜುಕೇಷನಲ್  ಚಾರಿಟಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ , ಆರ್ಥಿಕವಾಗಿ ಹಿಂದುಳಿದ, ವಿಧ್ಯಾಭ್ಯಾಸದಲ್ಲಿ ನಿಪುಣರಾಗಿರುವ 33 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ   ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

    ನವ ದೆಹಲಿಯ ಉದ್ಯಮಿ ಅನುರೂಪ್  ಕಂಪನಿಯ ಉಪಾಧ್ಯಕ್ಷರಾದ ಸಂತೋಷ್ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಅದರ  ಸದುಪಯೋಗಗೊಳಿಸಿ , ಜೀವನದಲ್ಲಿ ಅತ್ಯುನ್ನತ ಪ್ರಗತಿಯನ್ನು  ಸಾಧಿಸ ಬೇಕೆಂದು ಉಪದೇಶಿಸಿದರು, ಇಂತಹ  ಕಾರ್ಯವು ದೇವರ ಕಾರ್ಯ, ಪುಣ್ಯದ  ಕೆಲಸ ಎಂದು,  ಸಂಘಟಕರ ಸಂಘಟನಾ  ಪ್ರವರ್ತಿಯನ್ನು  ಪ್ರಶಂಶಿಸಿ, ಕ್ರಥಜ್ಞತೆಯನ್ನು ಅರ್ಪಿಸಿದರು ಮತ್ತು ಶ್ರೀ ನಾರಾಯಣ ಗುರುಗಳ ಸಂಘಟನೆಯಿಂದಲೇ  ಶಕ್ತರಾಗಿರಿ ಎಂಬ ಸಂದೇಶವನ್ನು ಸ್ಪಷ್ಟಪಡಿಸಿದರು.

    ವೇಧವ್ಯಾಸರು ತಾವು  ಎಷ್ಟೇ ಕಾರ್ಯನಿರತರಾಗಿದ್ದರೂ ಈ ಜಾರಂದಾಯ ಕ್ಷೇತ್ರದ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ತಮಗೆ ಬಲು ಪ್ರಿಯವೆಂದು ಕ್ಷೇತ್ರದ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿದರು. ವಿಧಾರ್ಥಿಗಳನ್ನು ಉದ್ಧೇಶಿಸಿ  ಜೀವನದಲ್ಲಿ ಸಹನೆ ಅತಿ ಮುಖ್ಯ, ತಮ್ಮ ಪೋಷಕರೊಂದಿಗೆ ಗೌರವದಿಂದ ವರ್ತಿಸಿರಿ ಎಂದು ಉಪದೇಶಿಸಿದರು.

    ನೆರೆದಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ  ತಮ್ಮ ಅಧಿಕಾರವನ್ನು ಉಪಯೋಗಿಸಿ ಸಾಮಾಜಿಕ ಕಳಕಳಿಯಿಂದ ಕರ್ತವ್ಯದಲ್ಲಿ ತೊಡಗಿಸಲು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ಸ್ಪೂರ್ತಿಯಾಗಲಿ ಎಂದು ವಾಲ್ಟರ್ ನಂದಳಿಕೆ ತಮ್ಮ ಆಶಯವನ್ನು ತಿಳಿಸಿದರು.

    ಅರ್ಚನಾ ಸಚಿತ್ ರವರು ಇಂದು ವಿಧಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ತಮ್ಮ ವಿಧ್ಯಾಭಾಸವನ್ನು ಯಾವ ಕೊರತೆಯು ಇಲ್ಲದೆ ಮುಂದುವರಿಯಲು ಸಹಾಯ ಮಾಡಿದ ಸಂಘಟನೆಗೆ  ಕೃತಜ್ಞರಾಗಿದ್ದು, ತಾವು ಯಶಶ್ವಿಯಾಗಿ ಮುಂದೆ ಸಂಘಟನೆಯ  ಇಂತಹ ಪುಣ್ಯ ಕಾರ್ಯಗಳಿಗೆ ಸಹಾಯಹಸ್ತವನ್ನು  ನೀಡಬೇಕೆಂದು ತಿಳಿಸಿದರು.

    ಅಧ್ಯಕ್ಷರಾಗಿ ಶಾಸಕರಾದ ವೇಧವ್ಯಾಸ್ ಕಾಮತ್ ರವರು  ಕಾರ್ಯಕ್ರಮಕ್ಕೆ ಮೆರಗು ನೀಡಿದರು, ದಾಯ್ಜಿ  ವರ್ಲ್ಡ್  ಸಂಸ್ಥಾಪಕರಾದ  ವಾಲ್ಟರ್ ನಂದಳಿ ಕೆ, ಯೆಯ್ಯಾಡಿ ಯಾಮಿನಿ ಬಿಲ್ಡರ್ಸ್ ನ ಮಾಲಕರಾದ ದಾಮೋದರ ದಂಡಕೇರಿ,  ಇಂಡಿಗೋ ಏರ್ಲೈನ್ಸ್ ಸಂಸ್ಥೆಯ  ಮಾಜಿ ವ್ಯವಸ್ಥಾಪಕಿ ಅರ್ಚನಾ ಸಚಿತ್, ಕಾರ್ಪೊರೇಟರ್  ಜಗದೀಶ್ ಎಂ ಶೆಟ್ಟಿ , ಎಸ್ . ಎಲ್ . ಶೇಟ್ ಜ್ಯೂವೆಲ್ಲರ್ಸ್ ಎಂಡ್ ಡೈಮಂಡ್ ಸಂಸ್ಥೆಯ ಮಾಲಕ ಪ್ರಶಾಂತ್ ಶೇಟ್, ಸಾಯಿ ಗಾರ್ಡೆನ್ ಮಾಲಕ  ನಿತೇಶ್ ಸುವರ್ಣ , ಕಾಳಿ ಚರಣ್ ಫ್ರೆಂಡ್ಸ್ ಅಧ್ಯಕ್ಷ ವಿಜೇಂದ್ರ ಸಾಲಿಯಾನ್ , ಜಾರಂದಾಯ ದೈವಸ್ಥಾನ ದ  ಆಡಳಿತ ಮೊಕ್ತೇಸರ ಹಾಗು ಶ್ರೀ ನಾರಾಯಣ ಗುರು ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಬಿ ಶ್ರೀಧರ್ ಕುಮಾರ್, ದೈವಸ್ಥಾನ ಮತ್ತು ಶ್ರೀ ನಾರಾಯಣ ಗುರು ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಬಲರಾಜ್ ಕೋಟ್ಯಾನ್ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಮಾಧವ ಸುವರ್ಣರವರನ್ನು ಸನ್ಮಾನಿಸಲಾಯಿತು.

    ಕೋಶಾಧಿಕಾರಿಗಳಾದ ಕಿರಣ್ ಕುಮಾರ್   ಸಾಲ್ಯಾನ್  ಮತ್ತು ಚಂದ್ರಕಾಂತ್ ಕುಮಾರ್ , ಕಾರ್ಯದರ್ಶಿ  ರಾಮ ಬಿ  ಮತ್ತು ಸಂಘಟನೆಯ ಸರ್ವ ಸದಸ್ಯರು ಹಾಗು  ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗು ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು

    boloor India scholarship shri narayana guru eductional charitable trust talent ward
    Share. Facebook Twitter Pinterest LinkedIn Reddit WhatsApp Telegram Email
    Previous Articleಕೆಎಸ್ಸಾರ್ಟಿಸಿ ಬಸ್ಸ್ ಗೆ ದ್ವಿಚಕ್ರ ವಾಹನ‌ ಡಿಕ್ಕಿ, ಬೈಕ್ ಸವಾರ ಮೃತ್ಯು
    Next Article ಅವಳಿ ಮಕ್ಕಳ ಪ್ರಶ್ನೆಗೆ ಕಂಗಾಲಾದ ಕರಣ್ ಜೋಹರ್
    News Desk

    Related Posts

    ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲ್ಯಾಂಡ್ಸ್ ಭೇಟಿ ನೀಡಿದರು

    May 16, 2026

    ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

    May 15, 2026

    ಕೇರಳ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭಾಗವಹಿಸಲಿದ್ದಾರೆ

    May 15, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202489 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202483 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202425 Views

    ರಶ್ಮಿಕಾ ಮಂದಣ್ಣ ಬಲಗಾಲಿಗೆ ಗಾಯ

    January 11, 202524 Views
    Don't Miss
    World May 23, 2026

    ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ

    ಚೀನಾ: ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಕನಿಷ್ಠ 90 ಜನರು ಸಾವನ್ನಪ್ಪಿದ್ದು, ಇಬ್ಬರು ಕಾಣೆಯಾಗಿದ್ದಾರೆ ಎಂದು…

    ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲ್ಯಾಂಡ್ಸ್ ಭೇಟಿ ನೀಡಿದರು

    ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

    ಕೇರಳ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭಾಗವಹಿಸಲಿದ್ದಾರೆ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ

    ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲ್ಯಾಂಡ್ಸ್ ಭೇಟಿ ನೀಡಿದರು

    ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

    Most Popular

    ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

    May 15, 20260 Views

    ವಿಮಾನ ತಡವಾಗಿ ಹೊರಡಲಿದೆ ಎಂದು ಘೋಷಿಸಿದ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

    January 15, 20241 Views

    ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ

    January 17, 20241 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.