ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ರಾಮಭಕ್ತರ ಮೇಲೆ ಹಲ್ಲೆ ನಡೆದಿದೆ. ಕೇರಳದಲ್ಲಿ ರಾಮನಾಮ ಜಪಿಸಿ ಎಂದ ಖ್ಯಾತ ಗಾಯಕಿ ಚಿತ್ರಾ ಎಡಪಂಥೀಯರ ಕೆಂಗಣ್ಣಿಗೆ ಸಿಲುಕಿದ್ದಾರೆ.
ಬಹುಭಾಷಾ ಗಾಯಕಿ, ಹಿರಿಯ ಗಾನಕೋಗಿಲೆ ಕೆ.ಎಸ್.ಚಿತ್ರಾ ಅವರ ಈ ಮಾತಲ್ಲೂ ಏನು ವಿವಾದ ಇದ್ಯೋ ಗೊತ್ತಿಲ್ಲ. ಆದರೂ ವಿವಾದ ಆಗಿದೆ. ವಿವಾದ ಎಬ್ಬಿಸಿರೋದು ಕೇರಳದ ಎಡಪಂಥೀಯರು .ಕೆಟ್ಟದಾಗಿ ಅವಾಚ್ಯವಾಗೆಲ್ಲಾ ಚಿತ್ರಾ ಅವ್ರನ್ನ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದಾರೆ.