ತಮಿಳುನಾಡು ರಾಜಕೀಯದ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿ ಅಧಿಕಾರದ ಹೊಸ್ತಿಲಲ್ಲಿ ನಿಂತಿದ್ದ ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷಕ್ಕೆ ಈಗ ‘ಮೈತ್ರಿ’ ಸಂಕಷ್ಟ ಎದುರಾಗಿದೆ. ಅಧಿಕಾರದ ಕುರ್ಚಿ ಏರುವ ಮುನ್ನವೇ ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ (Demand) ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ
ಕೋಟೆ ಗೆದ್ದ ಸಂಭ್ರಮದಲ್ಲಿ ದಳಪತಿ ವಿಜಯ್ (Vijay) ರಾಜಭವನದತ್ತ ಹೆಜ್ಜೆ ಇಡಲು ಸಿದ್ಧರಾಗಿದ್ದರು.
ಬಹುಮತದ ಗಡಿಗೆ ಬಂದು ನಿಂತಿದ್ದ ದಳಪತಿಗೆ ಮೈತ್ರಿ ಪಕ್ಷಗಳು ನೀಡಿದ ಶಾಕ್ನಿಂದಾಗಿ ಸರ್ಕಾರ ರಚನೆಯ ಹಾದಿ ಈಗ ಅನಿಶ್ಚಿತತೆಯತ್ತ ಸಾಗಿದೆ.
ಜನರ ತೀರ್ಪು ಅವರ ಪರವಾಗಿತ್ತು, ಆದರೆ, . ಬೆಂಬಲಕ್ಕೆ ನಿಲ್ಲಬೇಕಿದ್ದ ಪಕ್ಷಗಳೇ ಈಗ ಅಧಿಕಾರಕ್ಕಾಗಿ ಪಟ್ಟು ಹಿಡಿದು ದೂರ ಸರಿದಿರುವುದು ತಮಿಳುನಾಡು ರಾಜಕೀಯದಲ್ಲಿ(Tamil Nadu) ಹೊಸ ಬಿರುಗಾಳಿ ಎಬ್ಬಿಸಿದೆ.
