ಉಡುಪಿ : ಉಡುಪಿ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ, ಜಗಮಗಿಸುವ ದೀಪಾಲಂಕಾರದಿಂದ ಕೃಷ್ಣ ನಗರಿ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುತ್ತಿದೆ. ಪುತ್ತಿಗೆ ಶ್ರೀ ಸುಗುನೇಂದ್ರ ಶ್ರೀ ಪಾದರ ಪರ್ಯಾಯ ಮಹೋತ್ಸವ ಕಣ್ತುಂಬಿಕೊಳ್ಳಲು ಜನರು ಕಾತುರಾಗಿದ್ದಾರೆ.
ಪರ್ಯಾಯ ಪೀಠಾರೋಹಣಗೈಯ್ಯಲಿರುವ ಪುತ್ತಿಗೆಯ ಶ್ರೀ ಸುಗನೇಂದ್ರ ಸ್ವಾಮೀಜಿಗಳು ಭವ್ಯ ಪಲ್ಲಕ್ಕಿ ಮೆರವಣಿಗೆ ಮೂಲಕ ಉಡುಪಿ ನಗರವನ್ನು ಪ್ರವೇಶ ಮಾಡುವುದೇ ಕಣ್ಣಿಗೆ ಹಬ್ಬವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಜಗತ್ತಿನ ಮೂಲೆ ಮೂಲೆಯಿಂದ ಬಂದಿರುವ ಜನರು ಕಾತುರರಾಗಿದ್ದಾರೆ.