ಬೆಂಗಳೂರು : ತಮ್ಮ ವೃತ್ತಿಜೀವನದ ಪ್ರಗತಿಗಾಗಿ ಅಥವಾ ವಿದ್ಯಾಭ್ಯಾಸಕ್ಕೆ ಸಾಕಷ್ಟು ಮಹಿಳೆಯರು ಸಿಲಿಕಾನ್ ಸಿಟಿಗೆ ಬರುತ್ತಾರೆ. ಇವರೆಲ್ಲ ಪ್ರಾಣ, ಮಾನಕ್ಕಾಗಿ ಪೊಲೀಸರು ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕಳ್ಳತನ, ಕೊಲೆ ಮಾತ್ರ ನಿಲ್ಲುತ್ತಿಲ್ಲ.
ಒಂಟಿ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆಗೈದು ಚಿನ್ನದ ಸರ ಕಳವು ಮಾಡಿರುವಂತಹ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ದಿವ್ಯಾ (36) ಮೃತ ಮಹಿಳೆ. ಗಂಡ ಗುರುಮೂರ್ತಿ ಸಲೂನ್ ಕೆಲಸಕ್ಕೆ ಹೋಗಿದ್ದಾರೆ. ಈ ವೇಳೆ ದಿವ್ಯಾ ಮನೆಯಲ್ಲಿ ಒಂಟಿಯಾಗಿದ್ದರು.